Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಜಟಾಯು` ಸಂಚಾರ ಸಧ್ಯದಲ್ಲೇ ಆರಂಭ
Posted date: 28 Wed, Mar 2012 ? 09:26:53 AM

’ಸಂಚಾರಿ’ ಚಿತ್ರದ ನಾಯಕ ರಾಜ್ ಈಗ ’ಜಟಾಯು’ ಚಿತ್ರದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಸಂಚಾರಿ ನಿರ್ಮಿಸಿದ ಅಮೋಘ ಎಂಟರ್‌ಪ್ರೈಸಸ್ ಪ್ರಭಾಕರ ಅವರು ಈ ಚಿತ್ರದ ನಿರ್ಮಾಪಕರು.

ಅಂದು ಶ್ರೀ ರಾಮಚಂದ್ರನ ರಕ್ಷಣೆಗೆ ಬಂದು ನಿಂತ ’ಜಟಾಯು’ ಪಕ್ಷಿಗೂ ಈ ಚಿತ್ರಕ್ಕೂ ಕೆಲವು ಸಾಮ್ಯತೆಗಳು ತೆರೆಯ ಮೇಲೆ ನೋಡಿದರೆ ಕಂಡು ಬರಲಿದೆ ಎನ್ನುತ್ತಾರೆ ನಿರ್ಮಾಪಕರು. ತ್ರೇತಾಯುಗದಲ್ಲಿ ಗಾಳಿಯಲ್ಲಿ ಸಂಚರಿಸಿ ರಾವಣನ ಎದುರಾಗಿ ಸೀತಾಮಾತೆಯನ್ನು ಕಾಪಾಡಲು ’ಜಟಾಯು’ ಶ್ರಮಿಸುವುದು ಹಾಗೂ ಸೋಲುವುದು. ಈ ಕಲಿಯುಗದ ’ಜಟಾಯು’ ಚಿತ್ರದಲ್ಲಿ ’ಸಂಚಾರಿ’ ಚಿತ್ರದ ನಾಯಕ ರಾಜ್ - ಗಾಳಿಯೇ ನೋಡು ಬಾ, ದೀಪದ ನರ್ತನ ................. ಎಂಬ ಜನಪ್ರಿಯ ಗೀತೆಗೆ ಬಿಯಾಂಕ ದೇಸಾಯಿ ಜೊತೆಗೆ ಕುಣಿದಿರುವವರು ಈ ಸಾಹಸ ಪ್ರಧಾನ ಚಿತ್ರದಲ್ಲಿ ಹಲವಾರು ತಯಾರಿಗಳನ್ನು ಪಾತ್ರಕ್ಕಾಗಿ ಮಾಡಿಕೊಳ್ಳುತ್ತಿದ್ದಾರೆ.

ನಿರ್ಮಾಪಕ ಪ್ರಭಾಕರ್ ಸಧ್ಯಕ್ಕೆ ನಿರ್ದೇಶಕರ ಹಾಗೂ ಇನ್ನಿತರ ತಾಂತ್ರಿಕ ವರ್ಗದ ಪಟ್ಟಿಯನ್ನು ಗೋಪ್ಯವಾಗಿಟ್ಟು ಏಪ್ರಿಲ್ ಮಧ್ಯದಲ್ಲಿ ಚಿತ್ರೀಕರಣ ಮಾಡಬೇಕೆಂದು ತಯಾರಿ ನಡೆಸಿದ್ದಾರೆ. ಅಂದ ಹಾಗೆ ಇವರ ಪ್ರಥಮ ಚಿತ್ರ ’ಸಂಚಾರಿ’ ಬೆಂಗಳೂರಿನಿಂದ ಸಂಚಾರ ಪ್ರಾರಂಭಿಸಿ ಅನೇಕ ಚಿತ್ರಮಂದಿರಗಳಲ್ಲಿ ಮುಂದೆ ಸಾಗಿ ೧೦೦ ದಿವಸ ಪ್ರದರ್ಶನ ಕಂಡ ಚಿತ್ರ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಜಟಾಯು` ಸಂಚಾರ ಸಧ್ಯದಲ್ಲೇ ಆರಂಭ - Chitratara.com
Copyright 2009 chitratara.com Reproduction is forbidden unless authorized. All rights reserved.